ಭಾನುವಾರ, ಡಿಸೆಂಬರ್ 28, 2025

ಮೈಸೂರು ರಾಜ್ಯ ಮತ್ತು ಬ್ರಿಟಿಷರು

 ಮೈಸೂರು ರಾಜ್ಯ ಮತ್ತು ಬ್ರಿಟಿಷರು 

         ವಿಜಯನಗರದ ಮಾಂಡಲೀಕರಾಗಿದ್ದ ಮೈಸೂರು ಒಡೆಯರ್ ಮನೆತನದ ಅರಸರು ಸುಮಾರು 17ನೇ ಶತಮಾನದಲ್ಲಿ ತಮ್ಮದೇ ಆದ ವಿಶಿಷ್ಟ ಇತಿಹಾಸ ಹೊಂದಿದ್ದಾರೆ....

                 ಕ್ರಿಸ್ತಶಕ 1399 ರಲ್ಲಿ ವಿಜಯ ಮತ್ತು ಕೃಷ್ಣ ಎಂಬ  ಸಹೋದರರು ದ್ವಾರಕೆಯಿಂದ ಇಲ್ಲಿಗೆ ಬಂದು ಮೈಸೂರು ಒಡೆಯರ ಆಳ್ವಿಕೆ ಹೊಂದಿದ್ದ ಈ ಅಂಶವು ರಾಜ ಒಡೆಯರ್ ಕಾಲದಿಂದ ವಿಶಿಷ್ಟವಾಗಿ ಬೆಳೆಯಿತು. ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರದ ಮಂಡಳಿಕ ಅಧಿಕಾರಿಯನ್ನು ಹೊರದೂಡಿ ಅದನ್ನು ರಾಜ ಒಡೆಯರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ನವರಾತ್ರಿ ಉತ್ಸವವನ್ನು ಪ್ರಾರಂಭಿಸಿದರು. 

         ಈ ವಂಶದ ಕಂಠೀರವ ನರಸರಾಜ ಒಡೆಯರು ಖಡ್ಗವರಸೆಯ ನೈಪುಣ್ಯತೆ ಖ್ಯಾತಿಯಾಗಿದ್ದು, ವಿಜಯಪುರದ ರಾಣದುಲ್ಲಾ ಖಾನನನು ಯಶಸ್ವಿಯಾಗಿ ಎದುರಿಸಿ, ಸತ್ಯಮಂಗಲ, ಬೆಟ್ಟದಪುರ, ಅರಕಲಗೂಟಡು  ಪ್ರದೇಶಗಳನ್ನು ಆಕ್ರಮಿಸಿ ಮೈಸೂರು ರಾಜ್ಯವನ್ನು ವಿಸ್ತರಿಸಿದ್ದರು. ಶ್ರೀರಂಗಪಟ್ಟಣದಲ್ಲಿ ನರಸಿಂಹ ದೇವಾಲಯವನ್ನು ಸ್ಥಾಪಿಸಿದರು. ಬಂಗಾರದೊಡ್ಡಿ ಕಾಲುವೆ   ನೀರಾವರಿಗೆ ನೀಡಿದ ಕೊಡುಗೆಯಾಗಿದೆ. ಕಂಠೀರಾಯ ಪಣ ಚಿನ್ನದ ನಾಣ್ಯ ಗಳನ್ನು  ಟoಕಿಸಿದರು.

ಗೋವಿಂದ ವೈದ್ಯ, ಭಾಸ್ಕರ, ತಿಮ್ಮರಸ ಇನ್ನು ಮುಂತಾದ ಕವಿಗಳಿಗೆ ಆಶ್ರಯದಾತರಾಗಿದ್ದರು. ನರಸರಾಜರ ನಂತರ ಬಂದ ದೊಡ್ಡ ದೇವರಾಯರು (1655) ಕೆಳತಿ ಶಿವಪ್ಪನಾಯಕನ ದಾಳಿಯನ್ನು ಯಶಸ್ವಿಯಾಗಿ ಹಿಂದಕ್ಕೆ ಅಟ್ಟಿದರು. ಕುಣಿಗಲ್, ಚಿಕ್ಕನಾಯಕನಹಳ್ಳಿಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಂಡರು. ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹಾಕಿಸಿದರು. ಅಲ್ಲಿನ ನಂದಿ ವಿಗ್ರಹ ಸ್ಥಾಪನೆ ಮಾಡಿದರು.

ಚಿಕ್ಕದೇವರಾಯ ಒಡೆಯರು (1673-1704)

*ಇವರು ಮೈಸೂರಿನ ಸುಪ್ರಸಿದ್ದ ದೊರೆಗಳಲ್ಲೊಬ್ಬರು.

*ಕೆಳದಿ ಅರಸರಿಂದ ಬಾಣಾವರ, ವಸ್ತಾರೆ. ಚಿಕ್ಕಮಗಳೂರುಗಳನ್ನು ಗೆದ್ದರು. 

*ಇವರು ತುಮಕೂರು, ಹೊಸಕೋಟೆ, ಸೇಲಂ ಜಿಲ್ಲೆಯ ಕೆಲಭಾಗಗಳನ್ನು ವಶಪಡಿಸಿಕೊಂಡರು.

*ಮಾಗಡಿ, ಮಧುಗಿರಿ, ಕೊರಟಗೆರೆ, ಪ್ರಾಂತ್ಯಗಳು ಇವರ ರಾಜ್ಯಕ್ಕೆ ಸೇರ್ಪಡೆಯಾದವು.

*ಶಿವಾಜಿಯ ಮಗ ಸಂಭಾಜಿಯು ಕೆಳದಿ ಅರಸರು ಮತ್ತು ಗೋಲ್ಗೊಂಡ ನವಾಬರೊಡನೆ ಸೇರಿ ಒಡೆಯರು ಈ ಸೇನೆಯನ್ನು ಸೋಲಿಸಿದರು.

*ಇದೇ ಕಾಲಕ್ಕೆ ವಿಜಾಮರವನ್ನು ಗೆದ್ದು ಬೆಂಗಳೂರನ್ನು ವಶಪಡಿಸಿಕೊಂಡ ಮೊಘಲರಿಂದ ಬೆಂಗಳೂರನ್ನು ಚಿಕ್ಕದೇವರಾಜ ಒಡೆಯರು ಗುತ್ತಿಗೆಯಾಗಿ ಪಡೆದುಕೊಂಡನು.

*ಔರಂಗಜೇಬನ ಗೆಳೆತನ ಬೆಳೆಸಿ ಬೆಂಗಳೂರಿಗೆ ಗೊತ್ತುಪಡಿಸಿದ ಗುತ್ತಿಗೆ ಹಣ (ಇಜಾರಾ) ವನ್ನು ನಿಗಧಿತ ಸಮಯದಲ್ಲಿ ಮೊಘಲರಿಗೆ ಕೊಡುತ್ತಿದ್ದರು. ಒಂದು ಸೇನಾ ತುಕಡಿಯನ್ನು ಮೊಘಲರಿಗಾಗಿ ಸಿದ್ಧವಾಗಿಡಲು ಒಪ್ಪಿದ್ದರು.

*"ಕರ್ನಾಟಕ ಚಕ್ರವರ್ತಿ" ಎಂಬ ಬಿರುದನ್ನು ಹೊಂದಿದ್ದು ಚಿಕ್ಕದೇವರಾಜ ಒಡೆಯನು ಆಡಳಿತವನ್ನು ಸುವ್ಯವಸ್ಥೆಗೊಳಿಸಿದನು. ಆಡಳಿತದಲ್ಲಿ ಉತ್ತಮ ಸುಧಾರಣೆಗಳನ್ನು ಜಾರಿಗೆ ತಲು ಅಠಾರ ಕಚೇರಿ”ಯನ್ನು ಸ್ಥಾಪಿಸಿದರು. ಇದರಲ್ಲಿ 18 ಆಡಳಿತ ಶಾಖೆಗಳಿದ್ದವು.

*ಪತ್ರ ವ್ಯವಹಾರಕ್ಕಾಗಿ ವ್ಯವಸ್ಥೆ ಏರ್ಪಡಿಸಿ 'ಅಂಚೆ' ಇಲಾಖೆಯು ಆರಂಭಿಸಿದರು.

*ಆಡಳಿತದಲ್ಲಿ ಮಿತವ್ಯಯವನ್ನು ಸಾಧಿಸಿ ಖಜಾನೆಯಲ್ಲಿ ಅಪಾರ ಧನಕನಕಗಳನ್ನು ಸಂಗ್ರಹಿಸಿ “ನವಕೋಟಿ ನಾರಾಯಣ" ಎಂಬ ಬಿರುದನ್ನು ಪಡೆದರು.

* ಕಾವೇರಿ ನದಿಗೆ ಅಣೆಕಟ್ಟು ಕಟ್ಟಿಸಿ ಚಿಕ್ಕದೇವರಾಜನಾಲೆ ಮತ್ತು ದೊಡ್ಡ ದೇವರಾಜ ನಾಲೆ ಬಂದ ಕಾಲುವೆಗಳನ್ನು ನಿರ್ಮಿಸಿ ಅಧಿಕ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರೆಯುವಂತೆ ಮಾಡಿದರು.

*ಬೆಂಗಳೂರಿನ ಕೋಟೆ, ವೆಂಕಟರಮಣ ಮಂದಿರ, ಮೈಸೂರಿನ ಶ್ವೇತವರಹಾ ಮಂದಿರ, ಗುಂಡ್ಲುಪೇಟೆಯ ಪರಾಸುದೇವ ಮಂದಿರ ನಿರ್ಮಾಣ ಇವರ ಕಾಲದಲ್ಲಾದವು.

*ಚಿಕ್ಕದೇವರಾಜ ಒಡೆಯರು ಸ್ವತಃ ಕವಿಯಾಗಿದ್ದು ಇವರು ಮೇಲುಕೋಟೆ ಚೆಲುವ ನಾರಾಯಣನನ್ನು ಕುರಿತು "ಚಿಕ್ಕ ದೇವರಾಜ ಭಿನ್ನಪಂ” ಎಂಬ ಕಾವ್ಯವನ್ನು ಕನ್ನಡದಲ್ಲಿ ರಚಿಸಿದ್ದಾರೆ.

* ಸಿಂಗರಾರ, ಚಿಕುಪಾಧ್ಯಾಯ, ಸಂಚಿಹೊನ್ನಮ್ಮ, ಇವರುಗಳು ಆಸ್ಥಾನ ಕವಿಗಳಾಗಿದ್ದರು. ಇವರು ಮರಣವನ್ನಪ್ಪಿದ ಸಂದರ್ಭದಲ್ಲಿ ತನ್ನ ರಾಣಿಯರು ಯಾರು ಸಹಗಮನ ಮಾಡಬಾರದೆಮದು ಆಜ್ಞಾಪಿಸಿದ್ದರು.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮನೋವಿಜ್ಞಾನ ಕ್ವಿಜ್ 🧠 ಉನ್ನತ ಮಟ್ಟದ ಮನೋವಿಜ್ಞಾನ ಕ್ವಿಜ್ ಫಲಿತಾಂಶ ನೋಡಿ